Saturday, December 29, 2012

Love Jihad - Terrorism in the name of Love


ಲವ್ ಜಿಹಾದ್

ಜಿಹಾದ್ ಎಂದರೆ ನಮಗೆ ತಟ್ ಅಂತ ಹೊಳಿಯೋದೆ, ಅಲ್ಕೈದ ಮತ್ತು ತಾಲಿಬಾನ್ ಗಳ ಧರ್ಮಯುದ್ಧ. ಇದರ ಹೆಸರಿನ್ನಲ್ಲಿ ಅದು ಎಷ್ಟು ಜನರು ಬಲಿಹೊದರೋ ಲೆಕ್ಕವಿಲ್ಲ. ಜಿಹಾದ್ ಎಂದರೆ ಅವರ ಭಾಷೆಯಲ್ಲಿ ಧರ್ಮಯುದ್ಧ ಎಂಧರ್ಥ. ಅಂದರೆ ತಮ್ಮ ಧರ್ಮವನ್ನು ಬೆಳೆಸಿಕೊಳ್ಳಲು  ಯುದ್ಧ ಮಾಡ್ತ್ಹಿದ್ದಾರೆ ಇವರು. ಆದರೆ ಆವರು ಮಾಡಿದ್ದು ಅಸ್ತ್ರಗಳಿಂದ, ಮಾನವ ಬಾಂಬುಗಳಿಂದ. ದಯವೇ ಧರ್ಮದ ಮೂಲವೈಯ್ಯ ಎಂದು ನಾವು ಭಾರತಿಯರು ಪ್ರತಿಪಾದಿಸಿದರೆ, ಅವರು ಕೃರತ್ವ, ಹಿಂಸೆ, ಬಲವಂತ , ಯುದ್ಧ ಗಳಿಂದನೆ ತಮ್ಮ ಧರ್ಮವನ್ನು ಪ್ರತಿಪಾದಿಸಿದರು ಈ ಇಸ್ಲಾಮಿಯರು. ಅವರ ಉದ್ದೇಶವೇ, ಇಡಿ ಜಗತ್ತನ್ನು ಇಸ್ಲಾಮೀಕರಣ ಗೊಳಿಸಬೇಕಂತ. ಅದು ಯಾವ ದಾರಿಯಾದರು ಸರಿ, ರಕ್ತ ಹರಿಸಿಯಾದ್ರು ಸರಿ. ಇದು ಘೋರಿ, ಘಜ್ನಿ ಗಳಿಂದ ಪ್ರಾರಂಭವಾಗಿ ಇಂದು ಒಸಾಮಾ ಬಿನ್ ಲಾಡೆನ್,  ಐಸ್ಐ ವರೆಗೂ ಇನ್ನೂ ನಡಿತಾಯಿದೆ. ಆದರೆ ಇತ್ತೀಚೆಗೆ ಜಿಹಾದ್ ಪ್ರೀತಿಯಲ್ಲೂ ಹುಟ್ಕೊಂಡಿದೆ, ಇದು ನಿಮಗೆ ಗೊತ್ತಾ? ತಮ್ಮ ಧರ್ಮ ಪ್ರಚಾರಕ್ಕೆ, ತಮ್ಮ ಗುರಿ ತಲುಪುವುದಕ್ಕೆ, ಇಡಿ ಭಾರತವನ್ನು ಇಸ್ಲಾಮೀಕರಣ ಮಾಡುವದಕ್ಕೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ.


ತಮ್ಮ ಜಾತಿಯಲ್ಲಿ ಹೆಣ್ಣು ಮಕ್ಕಳು ಕಡಿಮೆಯಾಗಿದ್ದಕ್ಕೋ, ಬೇರೆ ಜಾತಿಯ ಹೆಂಗಸರನ್ನು ತಮ್ಮ ತೆಕ್ಕೆಗೆ ಬೀಳಿಸಿಕೊಂಡು ಮದುವೆಯಾಗಿ ಅವರ ಧರ್ಮ ಪರಿವರ್ತನೆಮಾಡಿ, ಮಕ್ಕಳನ್ನೂ ಮುಸ್ಲಿಮರನ್ನಾಗಿ ಮಾಡುತ್ತಾರೆ. ಇದರಿಂದ ಲಾಭವೇನೆಂದರೆ ಬೇಗನೆ ಇವರ(ಮುಸ್ಲಿಂ) ಸಂಖ್ಯ ಭಾರತದಲ್ಲಿ ಹೆಚ್ಚಾಗುತ್ತದೆ. ಪೊಲಿಟಿಕಲ್ ವೋಟು ಬ್ಯಾಂಕ್  ಮಾಡಿಕೊಂಡು ಮತ್ತೆ ಈ ಭಾರತವನ್ನು ಆಳಲು ಹೊಂಚು ಹಾಕುತ್ತಿದ್ದಾರೆ. ಈಗಾಗಲೇ ವೋಟ ಬ್ಯಾಂಕ್ ಪಾಲಿಟಿಕ್ಸ್ ಬಗ್ಗೆ ನಿಮಗೆ ಗೊತ್ತೇ ಇದೆ. ಇವರು ಸದ್ಯಕ್ಕೆ ಕಡಿಮೆ ಸಂಖ್ಯೆಯಲ್ಲಿರಬಹುದು, ಆದ್ರೆ ಇನ್ನು ಮುಂದಿನಿ ೧೦೦-೧೫೦ ವರ್ಷಗಳಲ್ಲಿ ಇವರು ಅದು ಎಲ್ಲಿ ನಿಲ್ತಾರೂ, ಎಷ್ಟು ಸಂಖ್ಯ ತಲುಪುತ್ತಾರೋ ಉಹಿಸಲಾರೆವು. ಇದು ಅಲ್ಲದೆ ಬಾಂಗ್ಲಾದೇಶಿ ಮುಸ್ಲಿಂಮರ ವಲಸೆ ಬೇರೆ.
ಲವ್ ಜಿಹಾದ್ ಸ್ಕೀಮ್ ಬಗ್ಗೆ ಮಾಹಿತಿ ಹೀಗಿದೆ,
೧. ಒಂದು ಹಿಂದು(ಬ್ರಾಹ್ಮಣ) ಹುಡುಗಿಯನ್ನು ಪ್ರೀತಿಸಿ ಮದುವೆಯಾದರೆ, ೫ ಲಕ್ಷ ರೂಪಾಯಿ.
೨. ಜೈನ ಹುಡುಗಿಯನ್ನು ಪ್ರೀತಿಸಿ ಮದುವೆಯಾದರೆ, ೩ ಲಕ್ಷ ರೂಪಾಯಿ.
೩. ಕೆಳ ಹಿಂದು ಜಾತಿಯ ಹುಡುಗಿಯರನ್ನು ಪ್ರೀತಿಸಿ ಮದುವೆಯಾದರೆ, ೨ ಲಕ್ಷ ರೂಪಾಯಿ.
ಇನ್ನು ಕೆಲವರಿಗಂತು ಮನೆ, ಸೈಟು, ಸರ್ಕಾರಿ ಕೆಲಸ, ಪ್ರೈವೇಟ್ ಕೆಲಸಗಳ ಕೊಡಿಸಲಾಗುತ್ತದೆ. ಹುಡುಗಿಯರನ್ನು ಬೈಕ್ ಮೇಲೆ ಸುತ್ತಾಡಿಸೋಕೆ ದುಡ್ಡು, ಪೆಟ್ರೋಲ್ ಕರ್ಚು ಕೊಡಲಾಗುತ್ತದೆ. ಇದನೆಲ್ಲಾ ನಡೆಸುತ್ತಿರುವುದು ಅರಬ್ ಹಾಗು ಸೌದಿ ದೇಶಗಳಲ್ಲಿ ಇರುವ ಇಸ್ಲಾಮಿ ಸಂಸ್ಥೆಗಳು. ಭಾರತದಲ್ಲಿ ಇರುವ ತಮ್ಮ ನೆಟ್ವರ್ಕ್ ಬಳಸಿ, ಈ ಕೃತ್ಯಗಳನ್ನು ನಡೆಸುತ್ತಾರೆ. ಇತ್ತೀಚಿಗೆ ಇದು ಎಲ್ಲಾ ನ್ಯೂಸ್ ಚಾನೆಲ್ಗಳಲ್ಲಿಯೂ ಇದನ್ನು ತೋರಿಸಿದ್ದರು. ಆದರೆ ಬಹಳಷ್ಟು ಜನಕ್ಕೆ ಇದು ತಿಳಿದಿಲ್ಲ.



ಲವ ಜಿಹಾದ್ ಗೆ ದೊಡ್ಡ ಪ್ರಮಾಣದಲ್ಲಿ ತುತ್ತಾಗಿರೋ ರಾಜ್ಯ ಕೇರಳ. ಅಲ್ಲಿ ಇಂದು ಇದು ನಡಿತಾಯಿದೆ. ಲವ ಜಿಹಾದ್ ಗೆ ಒಳಗಾಗಿರುವ ಹುಡುಗಿಯರನ್ನು ಮದುವೆ ಮಾಡಿಕೊಂಡು, ಆಮೇಲೆ ಅವರನ್ನು ವೆಷ್ಯರನ್ನಾಗಿ, ಪರಿವರ್ತಿಸುತ್ತಾರೆ. ಕೆಲವರು ಮದುವೆಯಾಗಿ ಬಿಟ್ಟು ಬಿಡುತ್ತಾರೆ. ಇದರಿಂದ ಬೇಸತ್ತ ಹುಡುಗಿ ಮತ್ತೆ ತನ್ನ ಧರ್ಮಕ್ಕೆ ಮರಳದೆ ಆತ್ಮಹತ್ಯೆಗೆ ಶರಣಾಗುತ್ತಾರೆ. ನಾನು ಈ ಲೇಖನದ ಮೂಲಕ ಎಲ್ಲ ಹಿಂದು, ಜೈನ, ಸಿಖ್ ಹುಡುಗಿಯರನ್ನು ಎಚ್ಚರಿಸುತ್ತಿದ್ದೇನೆ. ತಂದೆ ತಾಯಿಯಂದಿರು ಕೊಡ ಇದರ ಬಗ್ಗೆ ಗಮನ ವಿರಲಿ. ಎಲ್ಲ ಹೆಣ್ಣು ಮಕ್ಕಳಿಗೆ, ಇದರಬಗ್ಗೆ ಮಾಹಿತಿ ನಿಡಬೇಕಾಗಿದೆ, ಅವರ ಹೂವಿನಂತಾ ಜೀವನವನ್ನು ನರಕವಾಗುವುದರಿಂದ ತಪ್ಪಿಸಬೇಕು ನಾವೆಲ್ಲ.
ಹೆಣ್ಣನ್ನು  ಪೂಜಿಸುವ ಸಂಕೃತಿ ನಮ್ಮದು. “ಯತ್ರ ನಾರ್ಯಸ್ತು ಪುಜ್ಯಂತೆ, ತತ್ರ ರಮಂತೆ ದೇವತಃ”. ಎಲ್ಲಿ ನಾರರಿಯರನ್ನು ಸೋಶಿಸ್ತಿವೋ ಅಲ್ಲಿ ಕಂಡಿತ ಒಳ್ಳೇದು ಆಗುವುದಿಲ್ಲ. ಅದಕ್ಕೆ ಸ್ತ್ರೀಯರನ್ನು ಉಳಿಸಿ, ಸ್ತ್ರೀ ಶಕ್ತಿಯನ್ನು ಬೆಳಸಿ, ನಾಡು-ದೇಶ ಉಳಿಸಿ.

Thursday, December 27, 2012

Indina Rajakaarana(Todays Politics)


ಇಂದಿನ ರಾಜಕಾರಣ





ಹೋಗುವರು ಮನೆ ಮನೆಗೆ, ಬೇಡುತ್ತಾ
ವೋಟು ನಮಗೆ ಹಾಕಿಯಂತ, ಕೇಳುತ್ತಾ
ಅದು ಮಾಡ್ತಿನಿ ಇದು ಮಾಡ್ತಿನಿಯಂತ, ಹೇಳುತ್ತಾ

ಗೆಲ್ಲುವರು ಸ್ಪರ್ಧೆಯನ್ನು ವಿಜ್ರುಂಭಣೆಯಾಗಿ
ಬೀಗುವರು ರಾಜಧಾನಿಯಲ್ಲಿ ಮಂತ್ರಿಯಾಗಿ
ತಿನ್ನುವರು ಲಂಛ ಕಟ್ಟಕಟ್ಟವಾಗಿ

ಮರೆಯುವರು ಕೊಟ್ಟಿರುವ ಭರವಸೆಯನ್ನು
ತುಂಬುವರು ತಮ್ಮ ಖಜಾನೆಯನ್ನು
 ಸುರಿಸುವರು ಜನರ ಕಣ್ಣಿರನ್ನು

                                                    --- ಸುಧೀಂದ್ರ ದೇಸಾಯಿ

Thursday, December 20, 2012

Samajika Javabdari


ನಮ್ಮೆಲ್ಲರಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ನೀವು ಮುನ್ನಡೆಯಿರಿ, ದೇಶವು ಮುಂದೊರೆಯುತ್ತೆ.






Wednesday, November 28, 2012

Nimage Sittu Baralva?



ನಿಮಗೆ ಸಿಟ್ಟು ಬರಲ್ವಾ?

ಇತ್ತಿಚೆಗೆ ಎಲ್ರು ಕೇಳ್ತಿದ್ದಾರೆ, ಯಾಕೆ ಬರಿತ್ತಿದ್ದಿಯಾ ಅಂತ? ಫೇಸ್ಬುಕ್ ಮೇಲೆ ಬರಿ ಪಾಲಿಟಿಕ್ಸ್, ಸ್ವದೇಶಿ ಆಂದೋಲನ, ಗೋರಕ್ಷ....ಇತ್ಯಾದಿ ಬಗ್ಗೆ ಬರಿತಿಯ ಯಾಕೆ? ನೀನು ಬರಿತಿರುವ ತಾಪಿಕ್ಸ್ ಡಿಫರೆಂಟ್ ಹಾಗು ಕುತೂಹಲವಾಗಿರುತ್ತದೆ. ದೇಶ ಕೆಟ್ಟಹೋಗಿದೆ, ಇದು ಕಲಿಯುಗ ಯಾರು ಸರಿಮಾಡ್ಲಾರರು ಅಂತ ಹಿಂಗೆಲ್ಲ ಹೇಳ್ತಾರೆ. ಕೈ ಕಟ್ಟಿ ಕುಳಿತುಕೊಳ್ಳೋ ಜನ ಇರೋವರೆಗೂ, ಈ ದೇಶ ಉದ್ದಾರ ಆಗೋಲ್ಲ. ಸಿಟ್ಟು ಬರೋಕೆ ಕಾರಣಗಳೇನು?


೧. ಚಿಕ್ಕೊರಿರುವಾಗ ಶಾಲೆಯಲ್ಲಿ ಜನ ಗಣ ಮನ , ಸುಜಲಾಂ ಸುಫಲಾಂ ಅಂತ ಹಾಡಿದ್ದೇಕೆ. ಟೈಮ್ ಪಾಸ್ಗಾ?


೨. ಇದು ನನ್ನ ದೇಶ. ಕಾಶ್ಮೀರದಿಂದ ಹಿಡಿದು ಕನ್ಯಕುಮಾರಿಯವರೆಗೂ, ಗುಜರಾತದಿಂದ ಹಿಡಿದು ಅಸ್ಸಾಂ, ಅರುಣಾಚಲ್ ವರೆಗೂ, ಅದು ಭಾರತ ದೇಶ ಅಂತ ಓದ್ಸಿದ್ರಲ್ಲಾ ಶಾಲೆಯಲ್ಲಿ? ಇವಾಗ ಕಾಶ್ಮೀರ ಅರ್ಧ ತುಂಡು ಪಾಕಿಸ್ತಾನಕ್ಕೆ ನೀಡಿದ್ದೇವೆ, ಅರುಣಾಚಲವನ್ನು ಚೀನಾ ತನ್ನದೆಂದು ತಿಳಿದು ಅಲ್ಲಿ ರಾಜಾರೋಷವಾಗಿ ಓಡಾಡಿ ಬರುತ್ತಾರೆ. ಹೀಗೆ ಅದಾಗ ನಮಗೆ ಯಾಕೆ ಸಿಟ್ಟು ಬರಬಾರದು, ನಾನು ಯಾಕೆ ಬರಿಬಾರ್ದು. ಸತ್ಯವನ್ನು ತಿಳಿಸಲ್ಲಿಕ್ಕೆ ನಾನು ಬರಿತೀದ್ದೇನೆ.


೩. ಬ್ರಿಟಿಶರು ನಮ್ಮನ್ನು ಲೂಟಿ ಮಾಡಿದ್ರು, ನಮ್ಮಹುತಾತ್ಮರನ್ನು ನಾಯಿಗೆ ಹೊಡದಂಗೆ ಹೊಡ್ದು, ಗಲ್ಲಿಗೇರಿಸಿದ್ರಲ್ಲಾ, ನಾವು ಅದನ್ನು ಮರೆತು ಇನ್ನು ಅವರ ಪಾದ ಸೇವೆ ಮಾಡ್ತ್ಹಿದ್ದಿವಿ. ಯಾಕೆ? ನಮ್ಮ ದೇಶವನ್ನು ಕೊಳ್ಳೆಹೊಡದು, ನಮ್ಮ ದೇಶವನ್ನು ಇಬ್ಬಾಗ ಮಾಡಿ, ಬಡತನ ತಂದಿಟ್ಟು, ಜಾತಿ ದ್ವೇಷ ಚುಚ್ಚನ್ನು ಹೊತ್ತಿಸಿಹೊದ್ರಲ್ಲಾ. ಬ್ರಿಟನ್ ಮಹಾರಾಣಿಯನ್ನು ಕಾಮನ್ ವೆಲ್ತ್ ಗಮ್ಸೆಗೆ ಮುಖ್ಯ ಅಥಿತಿಯನ್ನಾಗಿ ಕರೆದ್ರಲ್ಲಾ ಯಾಕೆ. ಆವರಿಗೆ ನಾವು ಇನ್ನು ಯಾಕೆ ಮಣೆ ಹಾಕ್ತೀವಿ?


೪. ಬ್ರಿಟಿಶರು ಇಲ್ಲಿ ಬರಿ ನಮ್ಮ ಸಂಪತ್ತು ಲೂಟಿಮಾಡೋದಲ್ಲದೆ, ನಮ್ಮ ಸಂಸ್ಕೃತ ಜ್ಞಾನವನ್ನು ಲೂಟಿ ಮಾಡಿ ಹೋದ್ರು. ವೈಮಾನಿಕ ಶಾಸ್ತ್ರ, ಅರೋಗ್ಯ ವಿಜ್ಞಾನ, ಅಣುಶಕ್ತಿ ಗ್ರಂಥಗಳು ಮತ್ತೆನೆನ್ನೆಲ್ಲಾ ಕಳ್ತನ ಮಾಡದ್ರೋ ಗೊತ್ತಿಲ್ಲಾ. ಇವಾಗ ತಮ್ಮ ಹೆಸರಿನಲ್ಲಿ ಪರಿಶೋದನೆಗಳನ್ನು ನೋಂದಾಯಿಸಿಕೊಂಡಿದ್ದಾರೆ. ಭಾರತದಲ್ಲಿ ಮೊದಲು ವಿಮಾನ ಹಾರಿಸಿದವರು ಶಿವಕರ್ ಬಾಪೂಜಿ ತಲ್ಪಡೆ ಇವರು ೧೮೯೫ರಲ್ಲಿ ಮೊದಲ ಚಾಲಕನಿಲ್ಲದ ವಿಮಾನವನ್ನು ಹಾರಿಸಿತೊರಿಸಿದರು. ಮುಂಬೈನಲ್ಲಿ ನಡೆದ ಘಟನೆ ಇದು. ಆಮೇಲೆ ಇ ಸಾಶ್ತ್ರ ವ್ರೈಟ ಬ್ರದರ್ಸ್ ಗೆ ಸೇರಿತು. ನಮ್ಮ ಭಾರತಿಯನ ಹೆಸರನ್ನು ಮುಚ್ಚಿ ಹಾಕಿದರೂ ಈ ಆಂಗ್ಲರು. ಹೀಗೆ ಅದು ಎಸ್ಟು ಮಾಡಿದ್ದಾರೋ. ಸಿಟ್ಟು ಬರಲ್ವಾ ನಿಮಗೆ?


೫. ಸಂವಿಧಾನದಲ್ಲಿ ನೀಡಿರುವ ಮೀಸಲಾತಿಯನ್ನು ಒಂದಿಸ್ಟು ವರ್ಷಗಳ ನಂತರ ನಿಲ್ಲಿಸ ಬೇಕು ಅಂತ ಬರದಿದ್ದ್ರು, ಅದನ್ನು ಇನ್ನು ಮುಂದುವರಸಿಕೊಂಡು ಹೋಗ್ತಿದ್ದಾರಲ್ಲ ಯಾಕೆ? ಜಾತಿಯ ಮೇಲೆ ರಾಜಕಾರಣ ಮಾಡಿ ಜನರನ್ನು ವೊಡೆದು ಜಿವಿಸುತ್ತಿದ್ದಾರಲ್ಲಾ ಈ ಪೊಲಿಟಿಕ್ಸ್ ಪೀಪಲ್” (ರಾಜಕಾರಣಿಗಳು) ಇವರು ಮನುಷ್ಯರಾ? ನಾವು ಯಾಕೆ ದೆವೆಲೋಪಮೆಂಟಲ್ ಪಾಲಿಟಿಕ್ಸ್ ಮಾಡಬಾರದು ? ಹಾಗ್ ಮಾಡಿದ್ರೆ ಸರ್ವೇ ಜನಾ ಸುಖಿನೋಭವಂತುಅಲ್ಲವೇ ? ನಿಮಗೆ ರಾಜಕಾರಣಿಗಳನ್ನು ಕಂಡರೆ ಸಿಟ್ಟು ಬರಲ್ವಾ?


೬. ನಮ್ಮ ದುಡ್ಡು ನಮಗೆ ಕೊಟ್ಟು ಬೆಶ್ ಅನ್ನಿಸಿಕೊಳ್ತಾರೆ ಈ ರಾಜಕಾರಣಿಗಳು, ನಿಮಗೆ ಇದು ಗೊತ್ತಾ? ನಾವು ಗೊವೆರ್ನ್ಮೆಂಟ್ಗೆ ಟ್ಯಾಕ್ಸ್ ಕಟ್ಥಿವಿ. ಸರ್ಕಾರ ಮತ್ತು ರಾಜಕಾರಣಿಗಳು ಅದನ್ನು ದೇಶದ ಅಭಿವೃದ್ದಿಗೆ ಬಳಸಿಕೊಳ್ಳದೆ, ತಮ್ಮ ಖಜಾನೆ ತುಂಬಿ ಕೊಳ್ತಾರೆ. ಯಾವುದಾದರು ಮಠಗಳು, ಧರ್ಮ ಸಂಘಟನೆಗಳು ಸಾಮೊಹಿಕ ಪೂಜೆ, ಮದುವೆಗಳನ್ನು ಮಾಡಿಸ್ತಿವಿ ಅಂತ ಬಂದ್ರೆ, ದುಡ್ಡು ಕೊಟ್ಟು ತಾವು ಬೆಶ್ ಅನ್ಸಿಕೊಳ್ತಾರೆ? ಕೊಟ್ಟಿದ್ದು ತಮ್ ದುಡ್ಡಾ?


೭. ಯಾವುದಾದ್ರು ಗವರ್ನಮೆಂಟ್ ಆಫಿಸ್ಗೆ ಹೋದ್ರೆ ಸುಲಭವಾಗಿ ಕೆಲಸಗಳು ಆಗ್ತವಾ? ಚಪ್ಪಲಿ ಹರ್ದುಹೋಗ್ತವೆ ಹೊರತು ಕೆಲಸ ಆಗಲ್ಲ. ಬರ್ತ್ ಸೆರ್ಟಿಫಿಕೆಟ್ಯಿಂದ ಹಿಡಿದು, ಡೆಥ್ ಸೆರ್ಟಿಫಿಕೆಟ್ ವರೆಗು ಬರೀ ಲಂಚ. ಜೀವನ ಹ್ಯಾಗಮಾಡೋದು ಸ್ವಾಮಿ. ಸಿಟ್ಟು ಬರಲ್ವಾ, ಈ ಸರ್ಕಾರಿ ಕೆಲಸಗಳ ಬಗ್ಗೆ?


೮. ಸರಿ ಈ ನ್ಯೂಸ್ ಚಾನಲ್ಲು ಗಳನ್ನು ನಂಬೋಣವೆಂದರೆ,  ಪ್ರಜಾತಂತ್ರದ ಇನ್ನೊಂದು ಸ್ತಂಭವೆಂದು ಕರೆಯಲುಪಡುವ ಈ ನ್ಯೂಸ್ ಚಾನಲ್ಗಳು, ಇತ್ತೀಚಿಗೆ ಬಿಸಿನೆಸ್ ಹೌಸ್ಗಳಾಗಿ ಹೋಗಿವೆ. ನೀ ದುಡ್ಡು ಕೊಟ್ಟರೆ ನಿನ್ನ ಪರವಾಗಿ ನ್ಯೂಸ್ ಮಾಡ್ತಿವಿ ಅಂತ, ಸುಳ್ಳು ವಾರ್ತೆಯನ್ನು ಪ್ರಸಾರ ಮಾಡ್ತಾರೆ. ಯಾರನ್ನ ನಂಬೋದು ಸ್ವಾಮಿ ?


೯. ಈ ದೇಶದಲ್ಲಿ ೧೦ ರೂಪಾಯಿಗೆ ಕೋಕಾ-ಕೋಲಾ ಮಾರ್ತಾರೆ, ೧೫ ರೂಪಾಯಿಗೆ ನೀರು ಮಾರ್ತಾರೆ. ಸರಕಾರಗಳ ನೀತಿ ನೋಡಿ. ಸರಿ ಸರ್ಕಾರವನ್ನು ಬಿಟ್ಟು ಬಿಡಿ, ಜನರು ಕೂಡ ೫ ರೂಪಾಯಿ ಕೊಟ್ಟು ರೊಟ್ಟಿ ತಿನ್ನಲ್ಲ, ಆದ್ರೆ ೫೦ ರೂಪಾಯಿ ಕೊಟ್ಟು ಪಿಜ್ಜಾ, ಬರ್ಗರ್ ತಿಂತಾರೆ. ಜನ ಮರುಳೋ, ಜಾತ್ರೆ ಮರಳೋ” ?


ಇಡಿ ದೇಶ ಸುಳ್ಳಿನ ಕಂತೆಗಳ ಮೇಲೆ ಕಟ್ಟಲಾಗಿದೆ, ಇನ್ನು ಹಾಗೆ ಸುಳ್ಳು ಹೇಳ್ಕೊಂಡು, ಸುಳ್ಳಿನ ಬುನಾದಿಯ ಮೇಲೆ ಕಟ್ಟುತ್ತಾ ಹೋಗ್ತಿದ್ದಾರೆ. ಮುಂದಿನ ಪೀಳಿಗೆ ಇದನ್ನು ಪ್ರಶ್ನೆ ಮಾಡದೇ ಇರಲಾರರು. ನಮ್ಮ ದೇಶ ಹೀಗೇಕೆ, ಈ ಸ್ತಿಥಿ ಯಾಕ್ ಬಂತು? ನಾವು ನಮ್ಮಲ್ಲಿ ಅವಲೋಕಿಸಿಕೊಳ್ಳಬೇಕು. ನಮಗೆ ಬರೋ ಸಿಟ್ಟನ್ನು, ಒಳ್ಳೆ ರೀತಿಯಲ್ಲಿ ಉಪಯೋಗಿಸಿ ಎಲ್ಲರನ್ನು ಇದರ ವಿರುಧ ಹೋರಾಡಲು ಪ್ರೆರೆಪಿಸಬೇಕು.  De-Conditioning of Indian brains is required” . ಅದಕ್ಕೆ ನಾನು ಬರಿತ್ತಿದ್ದೇನೆ.


---- ಸುಧೀಂದ್ರ ದೇಸಾಯಿ

Sunday, November 4, 2012

KUKUDMI, REVATI AND EINSTIEN - Circle of Time!

ಕುಕುಡ್ಮಿ , ರೇವತಿ ಮತ್ತು ಐನ್ಸ್ಟೈನ್ -  ಕಾಲಚಕ್ರ!



ಕುಶಸ್ಥಲಿ ಎಂಬ ರಾಜ್ಯ, ಆ ರಾಜ್ಯದ ಅಧಿಪತಿ ಕುಕುಡ್ಮಿ. ಅದು ಒಂದು ದ್ವೀಪ ನಗರಿಯಾಗಿತ್ತು, ಅದೇ ನಗರವು ಮುಂದೆ ದ್ವಾಪರ ಯುಗದಲ್ಲಿ ಕೃಷ್ಣನ ದ್ವಾರಕೆಯಾಗುತ್ತದೆ. “ಕುಕುಡ್ಮಿ” ಯನ್ನು ಪುರಾಣಗಳಲ್ಲಿ ರೈವತ ಎಂಬ ಇನ್ನೊಂದು ಹೆಸರಿನಿಂದಲೂ ಕರೆಯುತ್ತಾರೆ. ಅವನಿಗೆ ಒಬ್ಬಳೇ ಮಗಳು, ಅವಳ ಹೆಸರು “ರೇವತಿ”. ಅವಳು ಪ್ರತಿಭಾವಂತೆ ಹಾಗು ಸುಂದರವಾಗಿದ್ದಳು. ಮಗಳ ಮದುವೆ ಮಾಡಲು ರಾಜ ಕುಕುಡ್ಮಿ ಆಲೋಚಿಸುತ್ತಾನೆ, ಭೂಮಿಯ ಮೇಲೆ ಇರುವ ಎಲ್ಲಾ ರಾಜ್ಯಗಳ ರಾಜರು, ವೀರರು ಹಾಗು ಯೋಗ್ಯ ವ್ಯಕ್ತಿಗಳ ಪಟ್ಟಿಯನ್ನು ಮಾಡಿ, ಇದರಲ್ಲಿ ಯಾರು ಅರ್ಹರು ಎಂಬ ನಿರ್ಧಾರಕ್ಕೆ ಬರಲು ವಿಫಲನಾಗುತ್ತಾನೆ. ಏಕೆಂದರೆ ಯಾರು ಅವನ ಮಗಳನ್ನು ಮೀರಿ ನಿಲ್ಲಲಿಲ್ಲ. ಹೀಗಿರುವಾಗ ತಾನು ಗೊಂದಲಕ್ಕೊಳಗಾಗಿ, ಯಾರನ್ನು ತನ್ನ ಮಗಳ ಗಂಡನೆಂದು ಆರಿಸಲು ವಿಫಲನಾಗುತ್ತಾನೆ. ಸರಿ ಬೇರೆ ಲೋಕಕ್ಕೆಲ್ಲ ತೆರಳಿ ಅಲ್ಲಿ ಯಾರಾದರು ತನ್ನ ಮಗಳಿಗೆ ಯೋಗ್ಯರು ಸಿಗಬಹುದೆಂದು ವಿಮಾನದಲ್ಲಿ ಮಗಳೊಂದಿಗೆ ತೆರಳುತ್ತಾನೆ, ಆದರೆ ಯಾರೂ ಸರಿಹೋಗದಿದ್ದಲ್ಲಿ, ಈ ಮನುಕುಲದ ಸೃಷ್ಟಿಕರ್ತನಾದ ಬ್ರಹ್ಮನನ್ನೇ ಕೆಳಿದರಾಯೀತೆಂದು, ತಾನು ತನ್ನ ಮಗಳೊಡನೆ ಬ್ರಹ್ಮ ಲೋಕಕ್ಕೆ ಪಯಣಿಸುತ್ತಾನೆ. ಆ ಲೋಕ್ಕಕ್ಕೆ ಹೊದ್ಮೇಲೆ ನೋಡುತ್ತಾರೆ, ಬ್ರಹ್ಮನು ಗಂಧರ್ವರ ಸಂಗೀತವನ್ನು ಕೇಳುತ್ತಿರುತ್ತಾನೆ, ಸರಿ ಈ ಸಂಗೀತ ಕಾರ್ಯಕ್ರಮ ಮುಗಿದ ಮೇಲೆ, ಬ್ರಹ್ಮನನ್ನು ಕೇಳೋಣವೆಂದು ಅಲ್ಲೇ ಸ್ವಲ್ಪ ಸಮಯ ಕಾಯುತ್ತಾರೆ. ಸಂಗೀತ ಪ್ರದರ್ಶನ ಮುಗಿದ ಮೇಲೆ, ಬ್ರಹ್ಮನೇ ಇವರನ್ನು ಕಂಡು, ಬಂದ ವಿಷಯವೇನೆಂದು ಕೇಳಲಿಕ್ಕೆ, ಕುಕುಡ್ಮಿ ತಾ ಬಂದ ವಿಚಾರ ಹಾಗು ತಾನಿರುವ ಗೊಂದಲದ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತಾನೆ. ಬ್ರಹ್ಮನು ಕುಕುಡ್ಮಿ ಆಯ್ದ ಹೆಸರುಗಳ ಪಟ್ಟಿಯನ್ನು ನೋಡುತ್ತಾ ನಕ್ಕು ಹೀಗೆ ಹೇಳುತ್ತಾನೆ,

ತತ್ ಪುತ್ರ-ಪೌತ್ರ-ನಪತ್ರನಮ್
ಗೊತ್ರಣಿ ಚ್ ನ್ ಶ್ರನ್ಮಹೇ
ಕಲೋ ಭಿಯತಸ್ ತ್ರಿ-ನವ-
ಚತುರ-ಯುಗ-ವಿಕಲ್ಪಿತಃ

ಮೇಲಿನ ಸಂಸ್ಕೃತ್ ಸ್ಲೋಕದಲ್ಲಿ ಬ್ರಹ್ಮ ಹೇಳುವುದೇನೆಂದರೆ “ನೀವು ಎಲ್ಲಾ ಲೋಕವನ್ನು ಸುತ್ತಿ, ಬ್ರಹ್ಮಲೋಕ್ಕಕೆ ಬಂದು ಹಾಗು ಕಾದಿರುವ ತುಸು ಸಮಯದಲ್ಲಿ, ಭೂಮಿಯಮೇಲೆ ಇಪ್ಪತ್ತೆಳು ಚತುರ್ಯುಗಗಳು (~ 42690240000 ದಿನಗಳು) ಕಳೆದು ಹೋಗಿವೆ, ನೀನು ಪಟ್ಟಿ ಮಾಡಿರುವ ಹೆಸರುಗಾಳಗಲಿ, ಅವರ ಮಕ್ಕಳಾಗಲಿ, ಮೊಮ್ಮಕ್ಕಾಳಗಲಿ , ಅವರ ವಂಶಿಕರಾಗಲಿ ಯಾರು ಬದುಕಿಲ್ಲ, ಕಾಲಚಕ್ರದಲ್ಲಿ ಅವರು ಹಾಗು ಅವರ ಹೆಸರು ಅಳಿದು ಹೋಗಿದೆ” ಎಂದೆನ್ನಲು ಕುಕುಡ್ಮಿ ಆಶ್ಚರ್ಯಚಕಿತನಾಗಿ ಕುಸಿದುಹೋಗುತ್ತಾನೆ. ಆದ್ರೆ ಬ್ರಹ್ಮನು ಅವನನ್ನು ಸಾಂತ್ವಾನ ಹೇಳಿ, ನೀನೇನು ಚಿಂತಿಸ ಬೇಡ ಭೂಮಿಯ ಮೇಲೆ ಇನ್ನೇನು ನಿ ಹಿಂತಿರುಗಿದಾಗ ಶ್ರೀ ಮಹಾವಿಷ್ಣು ಕೃಷ್ಣನಾಗಿ ಅವತರವಾಗುತ್ತೆ, ಅವನ ತಮ್ಮ ಬಲರಾಮ ರೇವತಿಗೆ ಯೋಗ್ಯ ವರ, ಹೋಗು ನಿನ್ನ ಮಗಳನ್ನು ಬಲರಾಮನಿಗೆ ಕೊಟ್ಟು ಮದುವೆ ಮಾಡೆಂದು ಹೇಳಿ ಕಳಿಸುತ್ತಾನೆ. ಕುಕುಡ್ಮಿ ಭೂಮಿಗೆ ಹಿಂತಿರುಗಲು, ಇಡಿ ಪೃಥ್ವಿಯ ನಕ್ಷೆ ಬದಲಾಗಿರುತ್ತದೆ. ಮನುಕುಲ ಎಲ್ಲದರಲ್ಲೂ ಕ್ಷಿಣಿಸಿ ಹೋಗಿರುತ್ತದೆ. ಮನುಜ ತನ್ನ ಬುದ್ದಿವಂತಿಕೆಯ ವಿಕಾಸದಲ್ಲಿ ಕೆಳಮಟ್ಟದಲ್ಲಿ ಇರುತ್ತಾನೆ, ಅನ್ಯಾಯ, ರಾಕ್ಷಸತ್ವ ಭೂಮಿಯ ಮೇಲೆ ಜಾಸ್ತಿಯಾಗಿರುತ್ತದೆ. ಸರಿ ಬಲರಾಮನನ್ನು ಕಾಣಲು ಇಬ್ಬರು ನಗರವನ್ನು ಪ್ರವೇಶಿಸಿದಾಗ, ಪ್ರಜೆಗಳು ಇವರನ್ನು ದಿಗಿಲುಗೊಂಡು ನೋಡುತ್ತಿರುತ್ತಾರೆ. ಏಕೆಂದರೆ ಅವರಿರುವ ಗಾತ್ರ, ಉದ್ದ ಅಸಾಧಾರಣವಾಗಿತ್ತು. ಅವರು ಆಗಿನ ಯುಗದ ಮನುಷ್ಯರಿಗಿಂತ ಬಹಳ ಎತ್ತರವಾಗಿದ್ದರು. ಸರಿ ಇನ್ನುಮುಂದೆ ಕೃಷ್ಣನ ಆದೇಶದಂತೆ ಬಲರಾಮ ರೇವತಿಯನ್ನು ಮದುವೆಯಾಗಲು ಒಪ್ಪುತ್ತಾನೆ, ಆದರೆ ಅವಳ ಎತ್ತರ ದೊಡ್ದದಾದರಿಂದ, ತನ್ನ ಆಯುಧ “ಉಳುಮೆ” (plough) ಯೀಂದ, ಅವಳ ತಲೆಗೆ ಕುಕ್ಕುತ್ತಾನೆ, ಅವಾಗ ಅವಳು ಬಲರಾಮನಿಗಿಂತ ಕಡಿಮೆ ಎತ್ತರದಲ್ಲಿ ಕುಗ್ಗುತ್ತಾಳೆ. ಬಲರಾಮ, ರೇವತಿ ಇಬ್ಬರು ಮದುವೆಯಾಗುತ್ತಾರೆ. ನಾವು ಈ ಕಥೆಯನ್ನು ಭಾಗವತದಲ್ಲಿ ಕೇಳಿರುತ್ತೇವೆ. ಈ ಕಥೆಯಿಂದ ನಮಗೆ ತಿಳಿದ ಒಂದು ವಿಷಯವೆಂದರೆ “ಕಾಲ ಆಚಲವಾದ್ದದಲ್ಲ(time is not constant), ಅದು ಬೇರೆ ಬೇರೆ ಆಯಾಮದಲ್ಲಿ ಅದು ಬೇರೆ ಆಗಿರುತ್ತದೆ(it is different in other dimensions)”. ಹಾಗೆ ಅದು ಬೇರೆ ಲೋಕಗಳಲ್ಲಿ, ಬೇರೆ ಬೇರೆ ಗತಿಯಲ್ಲಿ ಚಲಿಸುತ್ತದೆ.


ಈ ಕಥೆ ಏನೂ ನೀವು ಪುರಾಣಗಳಲ್ಲಿ ಕೇಳಿದ್ದಿರಿ, ಆದ್ರೆ ಈ ಟೈಮ್ ಮತ್ತು ಸ್ಪೇಸ್ ಬಗ್ಗೆ ನೀವು ಎಲ್ಲೊ ಓದಿರಬೇಕಲ್ಲಾ? ನೀವು ವಿಜ್ಞಾನದ ವಿಧ್ಯಾರ್ಥಿಯಾಗಿದ್ದಾರೆ ಐನ್ಸ್ಟೈನ್ ತಾತನ ಬಗ್ಗೆಯೆಂತು ಓದಿರುತ್ತೀರ, ಕನಿಸ್ಟ ಪಕ್ಷ ರಿಲೇಟಿವಿಟಿ ಥೆರಿ(theory of relativity) ಆರ್ E=MC2 ಬಗ್ಗೆ ಕೇಳಿರುತ್ತಿರಿ. ಐನ್ಸ್ಟೈನ್ ತಾತನು ಹೇಳಿದ್ದು ಅದೇ, ಆದರೆ ಅದು ವಿಜ್ಞಾನದ ಮೂಲಕ. ಐನ್ಸ್ಟೈನ್ ಏನಾದರು ಈ ಕುಕುಡ್ಮಿ ಮತ್ತು ರೇವತಿ ಕಥೆ ಕೇಳಿದ್ನಾ? ಅವನಿಗೆ ಸಮಯದ ರಹಸ್ಯದ ಬಗ್ಗೆ ತಿಳಿದದ್ದು ಈ ಕಥೆ ಕೇಳಿದ ಮೇಲಾ? ನನ್ನ ಅನುಮಾನವೇನೆಂದರೆ ಪಾಶ್ಚಿಮಾತ್ಯ ವಿಜ್ಞಾನಿಗಳು ಎಲ್ಲೊ ನಮ್ಮ ಪುರಾಣ ಕಥೆಗಳನ್ನು ಕೇಳಿಯೇ ತಮ್ಮ ವಿಜ್ಞಾನ ಸಂಶೋದನೆಯನ್ನು ಮಾಡಿದ್ದಾರಂತ. ಸ್ಟೀಫನ್ ಹಾಕಿಂಗ್(Stephen Hawking) ಕೂಡ ತನ್ನ “ಟ್ವಿನ್ಸ ಪ್ಯಾರಡಾಕ್ಸ್”( ಅವಳಿ ವಿರೋಧಾಭಾಸ ) ವಾದದಲ್ಲಿ ಇದನ್ನೇ ಮಂಡಿಸುತ್ತಾನೆ. ಇಬ್ಬರು ಅವಳಿ ಮಕ್ಕಳು ಒಂದೇ ದಿನ ಹುಟ್ಟಿರುತ್ತವೆ, ಆದರೆ ಒಬ್ಬನು ಭೂಮಿಯ ಮೇಲೆ ವಾಸಮಾಡುತ್ತಿದ್ದಾನೆ ಅಂತ ಇಟ್ಕೊಳ್ಳಿ, ಇನ್ನೊಬ ಒಂದು ಎತ್ತರದ ಪರ್ವತದ ಮೇಲೆ ವಾಸಮಾಡುತ್ತಿದರೆ, ಭೂಮಿಯ ಮೇಲೆ ಇರುವವನ ಆಯುಷ್ಯ, ಪರ್ವತದ ಮೇಲೆ ಇರುವವನಿಗಿಂತ ಹೆಚ್ಚಾಗಿರುತ್ತದೆ. ಇದೆ ಉದಾಹರಣೆ ಕೊಟ್ಟು ಸ್ಟೀಫನ್ ಹಾಕಿಂಗ್ ತನ್ನ ಪುಸ್ತಕ “ಬ್ರಿಫ್ ಹಿಸ್ಟರಿ ಆಫ್ ಟೈಮ್” ನಲ್ಲಿ ವಿವರಿಸುತ್ತಾನೆ. ನಿಮಗೂ ಸಮಯ ಕುಗ್ಗುವುದಾಗಲಿ, ಜಗ್ಗುವುದಾಗಲಿ ಆಗಿದೆಯಾ? ಏನೆ ಅದ್ರು ನಾವು ಕಾಲಕ್ಕೆ ತಕ್ಕಂತೆ ಕುಣಿಯಬೇಕು, ಓಡಬೇಕು. ಕಾಲಚಕ್ರದ ಮಹಿಮೆ ನಿಮಗೆ ತಿಳಿತಾ? ನೀವು ಏನ್ ಹೇಳ್ತಿರಿ?


------ ಸುಧೀಂದ್ರ ದೇಸಾಯಿ

Monday, October 29, 2012

Haaruva Tattegalu - Naa kandaddu


ಹಾರುವ ತಟ್ಟೆಗಳು – ನಾ ಕಂಡದ್ದು!






ಅದು 2000ರ ಏಪ್ರಿಲ್ ತಿಂಗಳು, ನಾನು ಧಾರವಾಡ ನ JSS ಕಾಲೇಜಿನಲ್ಲಿ ಪಿಯುಸಿ ಓದುತ್ತಿದೆ. ಸಮ್ಮರ್ ಹಾಲಿಡೇಸ ನಡೀತಿತ್ತು, ಹಂಚಿನಮನೆ ಕ್ಲಾಸೆಸ್ಗೆ ಹೊಗ್ತೀದ್ದೆ. ಬಹಳ ಆರಾಮಾಗಿ ಸ್ಟುಡೆಂಟ್ ಲೈಫ್ ನಡಿಸುತ್ತಾ, ಗೆಳೆಯರೊಂದಿಗೆ ಲೇಟ್ ನೈಟ್ ಮೂವೀಸ್, ಚಾಟಿಂಗ್, ಮಧ್ಯರಾತ್ರಿಯಲ್ಲಿ ಒಂದಿಬ್ಬರ ಫ್ರೆಂಡ್ಸ್ ಜೊತೆ ವಾಕಿಂಗ್ ಭರವಾಗಿ ಸಾಗುತಿದ್ದ ದಿನಗಳು. ಮಾಮೂಲಿಯಾಗಿ ಲೇಟಾಗಿ ಮಲಗಿ, ಬೇಗ ಏಳುವ ಅಭ್ಯಾಸವಾಗಿತ್ತು, ಏಕೆಂದರೆ ಬೆಳೆಗ್ಗೆ ಟಿಯುಶನ ಕ್ಲಾಸ್ಸೆಸ್ಗೆ ಹೋಗಬೇಕಿತ್ತು. ಬೆಳೆಗ್ಗೆ 5.30 ಗೆಲ್ಲಾ ಟಿಯುಶನಗೆ ಹಾಜಿರಾತಿ, ಆಮೇಲೆ ಒಂದಿಸ್ಟು ಹುಡಿಗೀರ್ನ ಲೈನ್ ಹೊಡಿಯೋದು,  ಪಾಠ ಕೇಳೋದು ಅಸ್ಟಕಸ್ಟೇ. ನನಗೆ ಓದುವದರ ಮೇಲೆ ಸ್ವಲ್ಪ ಆಸಕ್ತಿ ಕಡಿಮೆಯೀತ್ತು, ಆದರೆ ಜನರಲ್ ನಾಳೆಡ್ಜ ವಿಷಯಗಳಲ್ಲಿ ಬಹಳ ಇಂಟರೆಸ್ಟ ಇತ್ತು. ಅದರಲ್ಲೂ ಹಾರುವ ತಟ್ಟೆಗಳ(UFO) ಬಗ್ಗೆ ರಿಸರ್ಚ್ ಮಾಡುತಿದ್ದೇ, ಅವುಗಳ ನಿಜವಾಗಿಯೂ ಇವೆಯಾ ಅಥವಾ ಇವೆಲ್ಲಾ ಬರಿ ಕಟ್ಟು ಕಥೆಗಳಾ ಎಂದು ತಿಳಿಯಲು ಪ್ರಯತ್ನ ಮಾಡುತಿದ್ದೇ. ಅದೇನೂ ಹೇಳ್ತಾರಲ “ಬಯಸಿದ್ದು ಅದೇ, ಸಿಕ್ಕಿದ್ದು ಅದೇ” ಅಂತ, ಹಾಗೆ ಆಯಿತು ನನ್ನ ವಿಷಯದಲ್ಲಿ. ಒಂದು ರಾತ್ರಿ ನಾನು ಮತ್ತೆ ನನ್ನಿಬ್ಬರ ರೂಮಮೆಟ್ಸ್ ಜೊತೆ ಹೊರಗೆ ನನ್ನ ರೂಮಿನ ಎದುರಿಗಿರುವ ರೋಡಿನ ಮೇಲೆ ಕುಳಿತಿದ್ದೆ. ಏನೋ ಮಾತಗಳು ಆಡುತ್ತಾ ಕುಳಿತುಕೊಂಡಿದ್ವಿ, ಅಸ್ಟರಲ್ಲೇ ನಮ್ಮ ಓನರ್(Landlord or owner) ಮಗ ಹೊರಗೆ ಬಂದು, ಆಕಾಶ ನೋಡುತ್ತಾ “ ಅಣ್ಣಾ ಮೇಲೆ ನೋಡ್ರಿ ಅಂದ....!”, ನಾವು ಥಟ್ಟನೆ ಮೇಲೆ ನೋಡಿದೆವು. ಅವಾಗ ನಮಗೆ ದರ್ಶನವಾಗಿದ್ದು ಒಂದು “ತ್ರಿಯಾನ್ಗುಲರ್ ಯುಯಫೋ(Triangular UFO)”.
                                                ಅದು ಸದ್ದಿಲ್ಲದೆ ನಮ್ಮ ತಲೆಯ ಮೇಲೆ ಹಾದು ಹೋಗುತಿತ್ತು, ಬಹುಶ ಆ ನಮ್ಮ ಓನರ್ ನ ಮಗ ನಮಗೆ ಮೇಲೆ ನೋಡು ಅಂತ ಹೇಳದಿದ್ದರೆ, ನಾವು ಅದನ್ನು ನೋಡಿರತ್ತಿರಲ್ಲಿಲ. ಅದನ್ನು ನಾವು ಹಿಂಬಾಲಿಸುತ್ತಾ ಓಡಿದೆವು, ಸ್ವಲ್ಪ ದೂರದಲ್ಲೇ ಅದು ಒಂದು ಗುಡ್ಡದ(Mountain) ಮೇಲೆ ಹೊರಟು ಹೋಯಿತು. ನಾವು ಅದನ್ನ ಹಿಂಬಾಲಿಸಿ ಹೋಗೋಣವೆಂದು ಪ್ರಯತ್ನಿಸಿದೆವು, ಆದರೆ ಆಗಲಿಲ್ಲ. ಕಣ್ಣೆದುರಿಗಿದ್ದ ಅಚ್ಚರಿ, ನಿಮಿಷದಲ್ಲಿ ಮಾಯವಾಯಿತು. ಇದು ಕನಸೋ ? ಎಂಬ ಪ್ರಶ್ನೆ ಮೂಡಿತು. ನೋಡಿದ್ದು ಸಹಜವಾದದ್ದಲ್ಲ, ಎಂದೂ ಕಂಡಿದ್ದಿಲ್ಲದ್ದು. ಅವಗಾಗಿದ್ದ ಸಮಯ ರಾತ್ರಿ 12.30 AM, ರೂಮಿಗೆ ವಾಪಸ್ ಬಂದು ಮಲಗಿದೆ, ಎಸ್ಟೋ ಹೊತ್ತು ನಿದ್ದೆ ಬರಲಿಲ್ಲ. ಮತ್ತೆ ಬೆಳೆಗ್ಗೆ ಬೇಗ ಎದ್ದು ಟಿಯುಶನಗೆ ಹೋದೆ, ಎಲ್ಲರಲ್ಲೂ ರಾತ್ರಿ ನಡೆದ ಘಟನೆ ಬಗ್ಗೆ ತಿಳಿಸಿದೆ. ಆದರೆ ಯಾರು ನಂಬಲಿಲ್ಲ, ಕೆಲವರು ನಕ್ಕರು, ಇನ್ನೂ ಕೆಲವರು “ನೀನ್ ತಲೆ ಕೆಟ್ಟಿದೆಯ” ಎಂದು ಕೇಳಿದರು. ನನ್ನ ರೂಮಮೆಟ್ಸ್ ಕೂಡ ನನ್ನಜೊತೆ ಧ್ವನಿಗೂಡಿಸಿದರು, ಆದರು ಯಾರು ನಂಬಲಿಲ್ಲ. ನನಗು ಒಂದು ನಿಮಿಷ ನಾನು ಕಂಡಿದ್ದ “ಹಾರುವ ತಟ್ಟೆಗಳ” ಬಗ್ಗೆ ಶಂಖೆಯಯೀತು. ಆಮೇಲೆ 10 ಘಂಟೆಗೆ ಟುಯುಶನ್ ಬಿಡ್ತು, ಹೊರಗಡೆ ದಿನ ಪತ್ರಿಕೆಗಳನ್ನು ಓದುವಾಗ ಫ್ರಂಟ್ ಪೇಜಿನಲ್ಲಿ ಈ ಸುದ್ಧಿ ಪ್ರಕಟವಾಗಿತ್ತು, ಆ ಸುದ್ಧಿ ಹೀಗಿತ್ತು “ ಧಾರವಾಡ ನ ಕೆಲ ಭಾಗಗಳಲ್ಲಿ ಹಾರುವ ತಟ್ಟೆಗಳು ಕಾಣಿಸಿಕೊಂಡಿವೆ, ನಮ್ಮ ವರದಿ ವಿಭಾಗಕ್ಕೆ ಹಲವಾರು ಜನಗಳು ಫೋನು ಮಾಡಿ ತಿಳಿಸಿದ್ದಾರೆ” ಇದನ್ನು ಓದಿ ನನ್ನ ಸಂತೋಷಕ್ಕೆ ಪಾರವೆ ಇರಲಿಲ್ಲ. ಇದನ್ನು ಎಲ್ಲರಿಗೂ ತೋರಿಸಿದೆ, ಎಲ್ಲರೂ ನಂಬಿದರು, ಇನ್ನು ಕೆಲವರಂತೂ ನಾ ಕಂಡ ಅಚ್ಚರಿಯ ಬಗ್ಗೆ ಚಿಕ್ಕ ಮಕ್ಕಳಂತೆ ಕುಳಿತು ಕಥೆ ಕೇಳಿದರು. ನನಗಂತೂ ಎಲ್ಲಿಲ್ಲದ ಸಂತೃಪ್ತಿ ಹಾಗು ಯುಯಫೋ(UFO) ಗಳ ಬಗ್ಗೆ ಇನ್ನಸ್ಟು ಉತ್ಸಾಹ ಹುಟ್ಟಿಸಿತು. ಅಲ್ಲಿಗೆ ನನ್ನ ರೀಸರ್ಚ್ ಮುಗಿಯಲಿಲ್ಲ, ಸಮಯ ಸಿಕ್ಕಾಗಲೆಲ್ಲ ಈ ವಿಸ್ಮಯ ತಟ್ಟೆಗಳು, ಹಾರುವ ಈ ನಿರ್ಜೀವ ಹಕ್ಕಿಗಳ ಬಗ್ಗೆ ವಿಷಯಗಳನ್ನು ಹೆಕ್ಕಿ ಹಾಕುತ್ತಿದ್ದೆ. ನನ್ನ ಈ ಅನುಭವವನ್ನು ಆನ್ಲೈನ್ ವೆಬ್ಸೈಟ್ನಲ್ಲಿ ರೆಗಿಸ್ಟರ ಮಾಡಿದ್ದೇನೆ, ಲಿಂಕ್  ಇಲ್ಲಿದೆ
ಅಲ್ಲಿಗೆ ಯುಯಫೋಗಳ ಬಗ್ಗೆ ನನ್ನ ಪರಿಶೋದನೆ ನಿಲ್ಲಲಿಲ್ಲ, ಅವುಗಳ ಬಗ್ಗೆ ಎಸ್ಟೋ ಗೂಗಲ್(google) ಮಾಡಿದ್ದೇನೆ. ಯುಯಫೋ ಎಂದರೆ unidentified flying objects ಕೆಲವರಂತೂ ಅವುಗಳನ್ನು ಫ್ಲಯಿಂಗ್ ಸಾಸೆರ್ಸ್(flying saucers) ಎಂದು ಕರೆಯುತ್ತಾರೆ , ನಾನು ಕನ್ನಡದಲ್ಲಿ ಅವುಗಳನ್ನು ಚೊಕ್ಕವಾಗಿ ಹಾರುವ ತಟ್ಟೆಗಳೆಂದು ಹೆಸರಿಟ್ಟುಕೊಂಡಿದ್ದೇನೆ. ನಿಮಗೆ ನನ್ನ ನೈಜ ಕಥೆ   ಇಷ್ಟವಾಯೀತಾ?

Email ID : talk2desai@gmail.com

Monday, October 22, 2012

Naavu Putana Makkala ?




ನಾವು ಪುತನಾ(ಪೂತನಿ) ಮಕ್ಕಳಾ?





ನಾವು ನಮ್ಮ ನಾಗರಿಕತೆಯನ್ನು ಆಳವಾಗಿ ಅಧ್ಯಯನ ಮಾಡಿದರೆ, ನಮಗೆ ತಿಳಿಯುವ ಸತ್ಯವೇನೆಂದರೆ, ನಾವು ನಮ್ಮ ಅನುಭವದಿಂದ ಜೀವನೋಪಾಯಗಳನ್ನು ಕಲಿತುಕೊಂಡು, ಅವುಗಳನ್ನು ಅನುಸರಿಸುತ್ತಾ ಬಂದೆವು.  ನಾವು ಪಟ್ಟಿರುವ ಅನುಭವಗಳಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದು ಎರಡು ಇತ್ತು. ನಾವು ಇದು ಒಳ್ಳೆಯ ಅನುಭವ”  ಎಂಬ ನಿರ್ಧಾರಕ್ಕೆ ಬರಲು ಬಹಳ ವರ್ಷಗಳ ಸಂಶೋಧನೆ, ಎಲ್ಲರ ಅಭಿಪ್ರಾಯಗಳು, ತರ್ಕವಾದಿಗಳ ಜೊತೆ ಚರ್ಚಿಸಿ, ಈ ಒಳ್ಳೆಯ ಅನುಭವಗಳನ್ನು ಸಿದ್ಧಾಂತ, ಶಾಸ್ತ್ರ, ಗಣಿತ, ವೇದಗಳೆಂದು ಹೆಸರಿಟ್ಟು, ಅವುಗಳನ್ನು ನಮ್ಮ ನಾಗರಿಕತೆಗೆ ಅಥವಾ ಪೀಳಿಗೆಗೆ ಹಸ್ತಾಂತರ ಮಾಡುತ್ತಾ ಬಂದೆವು. ನಾವು ಕಲೆಹಾಕಿರುವ ವೇದಗಳು, ಶಾಸ್ತ್ರಗಳು ನಮ್ಮ ಹವಮಾನಕ್ಕೆ ಅನುಗುಣವಾಗಿ, ನಮ್ಮ ಮಣ್ಣು, ನೀರು, ಸೂರ್ಯ, ಗಾಳಿ, ಇವುಗಳಿಗೆ ತಕ್ಕಂತೆ ಅವುಗಳನ್ನು ರೂಪಿಸಲಾಗಿದೆ.  ಇವುಗಳನ್ನು ಅನುಸರಿಸುತ್ತಾ ನಮ್ಮ ಪೂರ್ವಜರು ಒಳ್ಳೆಯ ಜೀವನ ನಡೆಸಿದರು.  ಗೆಳೆಯರೇ, ಇಲ್ಲಿ ಒಳ್ಳೆಯ ಜೀವನವೆಂದರೆ ಅಧ್ಯಾತ್ಮಿಕವಾಗಿ, ಸಂಪ್ರದಾಯಕವಾಗಿ, ಆರೋಗ್ಯವಾಗಿ ಎಂಬರ್ಥ. ಪ್ರಾಚೀನ ಕಾಲದಿಂದಲೂ ನಮ್ಮಲ್ಲಿ ವಿಜ್ಞಾನಕ್ಕೆ ಏನೂ ಕೊರತೆ ಇರಲ್ಲಿಲ್ಲ, ಅದರಲ್ಲೂ ಚಿಕಿತ್ಸೆ, ಔಷಧಿಗಳಲ್ಲಂತೂ ಬಹಳ ಮೇಲುಗೈಯಿತ್ತು.  ಅದನ್ನೇ ನಾವು ಇವಾಗ ಅರ್ಯುವೇದ, ಹೋಮಿಯೋಪತಿ, ಯುನಾನಿ ಎಂದು ಕರೆಯುತ್ತೇವೆ.
ಸಾವಿರಾರು ವರ್ಷಗಳಿಂದಲೂ, ನಮ್ಮ ಕೃಷಿಗಾಗಿ ಬಳಸುತ್ತಿದ್ದ, ವಿಜ್ಞಾನ ಹಾಗೂ ತಂತ್ರಜ್ಞಾನ ಬಹಳ ಉಪಯೋಗಕಾರಿ ಹಾಗೂ ಫಲಪ್ರದವಾಗಿತ್ತು.  ಕೃಷಿ ಪರಶರಎಂಬ ಪುರಾತನ ಸಂಸ್ಕøತ ಸಂಗ್ರಹದಲ್ಲಿ ಕೃಷಿಯ ಬಗ್ಗೆ ಅಗಿನಿಂದಲೂ ಅನುಸರಿಸುತ್ತಿದ್ದ ವಿಧಾನಗಳನ್ನು ವಿವರಿಸಲಾಗಿದೆ.  ರೈತರು ನಮ್ಮ ಸನಾತನ ವಿಜ್ಞಾನವನ್ನು ಬಳಸಿಕೊಂಡು, ಒಳ್ಳೆಯ ಬೆಳೆಯನ್ನು ತೆಗೆಯುತ್ತೀದ್ದರು.  ಅದಕ್ಕೆ ದೊಡ್ಡ ಸಾಕ್ಷಿ ಏನೆಂದು ಕೇಳಿದರೆ, ನಮ್ಮ ಇತಿಹಾಸವೇ ಅದಕ್ಕೆ ದೊಡ್ಡ ಪ್ರಮಾಣ.  ನಮ್ಮ ದೇಶ ಪ್ರಾಚೀನ ಕಾಲದಿಂದಲೂ ಕೃಷಿ ಪ್ರಧಾನ ದೇಶ.  ಯಾವಾಗಲೂ ಸಸ್ಯ ಶಾಮಲವಾದ, ದವಸ-ಧಾನ್ಯಗಳಲ್ಲಿ ಸಮೃದ್ದವಾಗಿದ್ದಂತಾ ದೇಶ. ಒಳ್ಳೆಯ ಫಸಲು ಬೆಳೆದು ನಮ್ಮ ಮಾರುಕಟ್ಟೆಗಳಲ್ಲಿ ಮಾರುವುದಲ್ಲದೇ, ಯೋರೋಪ್, ಆಫ್ರಿಕಾ ಖಂಡಗಳಲ್ಲಿ ನಾವು ಪದಾರ್ಥಗಳ ವಿನಿಮಯ ಮಾಡುತ್ತೀದ್ದೆವು.  ನಾವು ಇಷ್ಟು ಸಂಪತ್ತಭರಿತವಾಗಿರಲು ನಾವು ಅನುಸರಿಸುತ್ತಿದ್ದ ಸನಾತನ ಕೃಷಿ ವಿಧಾನಗಳೇ ಕಾರಣ.  ಆ ಕೃಷಿ ಪದ್ಧತಿಗಳನ್ನು ನಾವಿಂದು ಸಾವಯವ ಕೃಷಿ (organic farming) ಎಂದು ಕರೆಯುತ್ತೇವೆ. ಈ ಸಾವಯವ ಕೃಷಿಯನ್ನು ನಾವು ಪಾಚೀನ ಕಾಲದಿಂದಲೂ ಮಾಡುತ್ತಾ ಬಂದಿದ್ದೇವೆ, ಹೆಸರು ಮಾತ್ರ ಬೇರೆ ಇಟ್ಟುಕೊಂಡಿದ್ದೇವೆ ಅಷ್ಟೆ. 
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 5-10 ವರ್ಷಗಳ ನಂತರ, ಕೆಲವು ರಾಜ್ಯಗಳಲ್ಲಿ ಬರ ಹಾಗೂ ನದಿ ಪ್ರವಾಹಗಳಿಂದ ಕೃಷಿ ಬೆಳೆ ನಾಶವಾಗಿ, ಹೊರ ದೇಶದಿಂದ ಆಹಾರ, ಧಾನ್ಯಗಳನ್ನು ಆಮದು ಮಾಡಿಕೊಳ್ಳಬೇಕಾಯಿತು.  ಹಾಗೂ ಮುಂದಿನ ದಶಕಗಳಲ್ಲಿ ಆಹಾರ ಕೊರತೆಗಳನ್ನು ನಿಗಿಸಲು, ಅಗಿನ ಸರ್ಕಾರಗಳು ಅಜೈವಿಕ ಕೃಷಿಯನ್ನು ನಮ್ಮ ಭಾರತಕ್ಕೆ ಪರಿಚಯಿಸಿದರು.  ಇದರಿಂದ ಭಾರತ ದೇಶ ಐದಾರು ವರ್ಷಗಳಲ್ಲಿ, ತನ್ನ ಆಹಾರ ಕೊರತೆಯನ್ನು  ನಿಗಿಸಿದಲ್ಲದೇ, ಹೆಚ್ಚಿನದನ್ನು ಹೊರದೇಶಗಳಿಗೆ ಮಾರಿದರು.  ಇಲ್ಲಿಗೆ ಅಜೈವಿಕ ಕೃಷಿಯನ್ನು ನಾವು ನಿಲ್ಲಿಸಿ, ಮತ್ತೆ ಸಾವಯವ ಕೃಷಿಗೆ ಮರಳಬೇಕಾಗಿತ್ತು, ಅದರೆ ಅದು ಅಗಲಿಲ್ಲ.  ಅಜೈವಿಕ (inorganic) ಪದ್ಧತಿಗಳಿಂದ ಹೆಚ್ಚು ಬೆಳೆ ಬಂದಿದ್ದರಿಂದ ರೈತರು ಹಾಗೂ ಸರ್ಕಾರಗಳ ಆಸೆ ಹೆಚ್ಚಾಯಿತು.  ಅತಿ ಹೆಚ್ಚಾಗಿ ಉತ್ಪಾದಿಸಿ, ಹಣ ಗಳಿಸಲಿಕ್ಕೆ ನಿಂತರು.  ಇದಲ್ಲದೇ ಆಂಗ್ಲರು, ಇನ್ನು ಶಕ್ತಿಶಾಲಿ ರಾಸಾಯನಿಕ ಗೊಬ್ಬರಗಳನ್ನು, ಕ್ರಿಮಿನಾಶಕಗಳನ್ನು ತಯಾರಿಸಿ, ಅದರ ದುಷ್ಪರಿಣಾಮಗಳನ್ನು ಮರೆಮಾಚಿ, ನಮ್ಮ ದೇಶದಲ್ಲಿ ಮಾರತೊಡಗಿದರು, ಇಲ್ಲೇ ಕಾರ್ಖಾನೆಗಳನ್ನು ಸ್ಥಾಪಿಸಿದರು.  ನಾವು ಸಾವಯವ ಕೃಷಿಯಲ್ಲಿ, ಗೊಬ್ಬರ ಹಾಗೂ ಕೀಟನಾಶಕಗಳನ್ನು ಬೆರಣಿ (cow dung), ಗೋಮುತ್ರ (cow urine) ಹಾಗೂ ಸಸ್ಯ ತ್ಯಾಜಗಳಿಂದ(plant waste) ತಯಾರಿಸಿ ಬಳಸುತ್ತೇವೆ.  ಮೊದಲು ನಮ್ಮ ಪೂರ್ವಜರು ಇದೇ ಪದ್ಧತಿಗಳನ್ನು ಅನುಸರಿಸುತ್ತಿದ್ದರು. ಇದರಿಂದ ನಮಗೆ ಉತ್ತಮ ಹಾಗೂ ಆರೋಗ್ಯಕರ ಬೆಳೆಗಳು ಬರುತ್ತಿದ್ದವು.  ಅದರೆ ಇವತ್ತು ಅಜೈವಿಕ ಕೃಷಿಯಿಂದ ನಮ್ಮ ಭೂಮಿ, ತನ್ನ ಫಲವತ್ತತೆಯನ್ನು ಕಳೆದುಕೊಂಡು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಾಕುವಂತಾಗಿದೆ.  ಇದರಿಂದ ಮಣ್ಣಿನಲ್ಲಿ  ಹೆಚ್ಚು ರಾಸಾಯನಿಕ ಸೇರಿಕೊಂಡು ಮಣ್ಣನ್ನು ವಿಷವನ್ನಾಗಿ ಮಾಡುತ್ತಿದೆ.  ಹೆಚ್ಚು ರಾಸಾಯನÀದಿಂದ, ಮಣ್ಣು ಸುಟ್ಟು ಹೋಗುತ್ತಿರುವ ಲಕ್ಷಣಗಳು ಕಾಣಿಸಿಕೊಂಡಾಗರೈತರು ಇನ್ನೂ ಹೆಚ್ಚು ನೀರನ್ನು ತಮ್ಮ ಕೃಷಿ ಭೂಮಿಗೆ ಉಣಿಸಬೇಕಾಯಿತು. ಮಣ್ಣಿನಲ್ಲಿ ಹೆಚ್ಚಾಗಿರುವ ರಾಸಾಯನಿಕ ಪದಾರ್ಥಗಳು ತರಕಾರಿಗಳಲ್ಲಿ, ಹಣ್ಣುಗಳಲ್ಲಿ, ಧಾನ್ಯಗಳಲ್ಲಿ ಸೇರಿಕೊಂಡವು, ಅಮೇಲೆ ಅವು ನಮ್ಮ ಶರೀರವನ್ನು ಸೇರಿದವು.  ಮಣ್ಣಿಗೆ ಹಾಗೂ ಫಸಲುನಲ್ಲಿ ಸಿಂಪಡಿಸಲಾದ ರಾಸಾಯನಿಕ ಕ್ರಿಮಿನಾಶಕಗಳು, ನಾವು ತಿನ್ನುವ ಪದಾರ್ಥಗಳಲ್ಲಿ ಸೇರಿಕೊಂಡವು.  ಹಾಗಾಗಿ ನಾವು ತಿನ್ನುವ ಪ್ರತಿಯೊಂದು ಪದಾರ್ಥ ವಿಷಮಯವೇ.  ಅಮೃತವನ್ನು ಉಣ್ಣಿಸುವ ನಮ್ಮ ಭೂಮಿ ತಾಯಿ, ಇವಾಗ ವಿಷವನ್ನು ಉಣಿಸುತ್ತಿದ್ದಾಳೆ.  ಅದಕ್ಕೆ ಕಾರಣ ನಾವು ಅವಳಿಗೆ ಬಡಿಸುತ್ತಿರುವ ರಾಸಾಯನಿಕ ಗೊಬ್ಬರ ಹಾಗೂ ಅನುಸರಿಸುತ್ತಿರುವ ಅಜೈವಿಕ ಪದ್ಧತಿಗಳೇ ಕಾರಣ.
ಅಜೈವಿಕ ಕೃಷಿಯಿಂದಾಗುವ ದುಷ್ಪರಿಣಾಮಗಳನ್ನು ನಾನ್ನಿಲ್ಲಿ ಪಟ್ಟಿ ಮಾಡಲು ಇಚ್ಚಿಸುತ್ತೇನೆ.  ಮೊದಲನೆಯದಾಗಿ ಹೇಳಬೇಕೆಂದರೆ ನಮ್ಮ ಕೃಷಿ ಭೂಮಿಯಲ್ಲಿ ದೊಡ್ಡ ಪ್ರಮಾಣದಲ್ಲಿರುವ ಏರೆಹುಳು (ಮಳೆ ಹುಳು), ಅವುಗಳನ್ನು ನಾವು ಕೊಲ್ಲುತ್ತಿದ್ದೇವೆ.  ಅಜೈವಿಕ ಕೃಷಿಯಲ್ಲಿ  ಬಳಸಲಾಗುವ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳೇಅವುಗಳನ್ನು ಸಾಯಿಸುತ್ತಿವೆ.  ಅದ್ದರಿಂದ ರೈತರ ಸ್ನೇಹ ಜೀವಿಗಳೆಂದು ಕರೆಯಲಾಗುವ ಏರೆಹುಳುಗಳು ಇವತ್ತಿನ ಪರಿಸ್ಥಿತಿಯಲ್ಲಿ ಭೂಮಿಯಲ್ಲಿ ಸಿಗುವುದಿಲ್ಲ, ಬಹಳ ವಿರಳವಾಗಿ ಕಾಣಿಸಿಕೊಳ್ಳುತ್ತವೆ.  ಏರೆಹುಳುಗಳ ಲಾಭ ಏನೆಂದರೆ ಎಲ್ಲಾ ರೈತರಿಗೆ ಹಾಗೂ ಸಾಮಾನ್ಯ ಜನರಿಗೂ ಗೊತ್ತು.  ಅತೀ ಹೆಚ್ಚು ರಾಸಾಯನಿಕ ಪದಾರ್ಥಗಳ ಬಳಕೆಯಿಂದ ಮಣ್ಣು ಸುಟ್ಟು ಹೋಗುತ್ತಿದೆ, ಅದರಿಂದಾಗಿ ಭೂಮಿಯು ತನ್ನ ಫಲವಂತಿಕೆ (fertility) ಕಳೆದುಕೊಳ್ಳುತ್ತಿದೆ.  ಭೂಮಿಯ ಫಲವಂತಿಕೆಯನ್ನು ಮತ್ತೆ ನೈಜ ರೂಪಕ್ಕೆ ತರಲು, ಬಹಳ ಸಮಯ ಹಾಗೂ ಪರಿಶ್ರಮ ಬೇಕಾಗುತ್ತದೆ.  ಮಣ್ಣಿನ ತೇವಾಂಶ ಕಡಿಮೆಯಾಗಿ ಭೂಮಿಗೆ ಹೆಚ್ಚು ನೀರುಣಿಸಬೇಕಾಗುತ್ತಿದೆ.  ಇದರಿಂದ ರೈರಿಗೆ ಹೆಚ್ಚಿನ ಖರ್ಚು ಹಾಗೂ ಅಂತರ್ಜಲವನ್ನು  ಹೆಚ್ಚಿನ ಪ್ರಮಾಣದಲ್ಲಿ ಹೊರಗೆಡಬೇಕಾಗುತ್ತಿದೆ.  ನಿಮಗೆಲ್ಲಾ ಗೊತ್ತು ಭಾರತದ ಬಹುತೇಕ ನಗರಗಳಲ್ಲಿ ಅಂತರ್ಜಲದ ಸಮಸ್ಯೆ ಉಲ್ಬಣವಾಗುತ್ತಿದೆ.  ಅದಲ್ಲದೇ ಇನ್ನೊಂದು ಗಮನಿಸುವ ವಿಷಯವೆಂದರೆ, ನಾವು ಉಪಯೋಗಿಸುತ್ತಿರುವ ರಾಸಾಯನಿಕ ಗೊಬ್ಬರ, ನಮ್ಮ ಅಂತರ್ಜಲವನ್ನು ಸೇರುತ್ತಿದೆ.  ಅದನ್ನೆ ನಾವು ಕುಡಿಯುವ ನೀರು ಹಾಗೂ ದಿನನಿತ್ಯ ಕಾರ್ಯಗಳಿಗೆ ಬಳಸುತ್ತಿದ್ದೇವೆ.  ನೀರಿನ ರುಚಿಯಂತು ಕೇಳಬೇಡಿ. ಇನ್ನೂ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳು, ನಮ್ಮ ಶರೀರ ಸೇರಿ, ನಮ್ಮ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗುತ್ತಿವೆ.  ಹೀಗಿರುವಾಗ ತಾಯಿಯ ಹಾಲಿನಲ್ಲೂ ಇದು ಸೇರಿ, ತಾಯಿಯ ಹಾಲು ಕುಡಿಯುವ ಕಂದಮ್ಮಗಳಿಗೆ, ಸೋಡಿಯಂ ಅಧಿಕ ಪ್ರಮಾಣದಲ್ಲಿ ಸೇರಿ ಸೋಡಿಯಂಅಧಿಕ್ಯತೆ(hypernatremia) ಗೆ ತುತ್ತಾಗುತ್ತಿದ್ದಾರೆ.  ಇದರಿಂದ ಕಂದಮ್ಮಗಳು (ಹಸುಗೂಸು) ಅತಿಯಾಗಿ ಡೀಹೈಡ್ರೇಷನ್ (dehydration) ಗೆ ಒಳಗಾಗುತ್ತಿದ್ದಾರೆ.  ಇದಲ್ಲದೆ ಇವತ್ತಿನ ಸಣ್ಣ ಮಕ್ಕಳು ಎಷ್ಟೂ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.  ಇವತ್ತಿನ ವೈದ್ಯರು ಹೇಳುವುದನ್ನು ನೀವು ಕೇಳಿರಬಹುದು, ಅದೆನೇಂದರೆ ಇವತ್ತಿನ ಮಕ್ಕಳು ಬಹಳ ನಾಜೂಕು, ಸೂಕ್ಷ್ಮ.  ಬೇಗೆನೆ ಅವಕ್ಕೆ ಕಾಯಿಲೆಗಳು ಅಂಟಿಕೊಳ್ಳುತ್ತೆ, ಅವುಗಳು ಹವಮಾ£ದ ಏರುಪೇರುಗಳಿಗೆ ಬಹಳ ಬೇಗ ತುತ್ತಾಗುತ್ತಾರೆ, ಹೀಗೆಲ್ಲಾ ಹೇಳುತ್ತಾರೆ.”  ಇದಕ್ಕೆಲ್ಲಾ ಏನು ಸ್ವಾಮಿ ಕಾರಣಗಳುನಮ್ಮ ತಾಯಿ ನಮಗೆ ಉಣಿಸುತ್ತಿರುವ ಹಾಲು ಹಾಗೂ ಪದಾರ್ಥಗಳೇ ಇದಕ್ಕೆ ಕಾರಣ. ಈಗಿನ ಎಷ್ಟೂ ತಾಯಂದಿರು ತಮ್ಮ ಎದೆ ಹಾಲನ್ನು ಪರೀಕ್ಷಿಸಿಕೊಳ್ಳುತ್ತಿದ್ದಾರೆಅದರಲ್ಲಿ ಇರೋ ಸೋಡಿಯಂ, ಯುರಿಯಾಗಳ ಪ್ರಮಾಣವನ್ನು ತಿಳಿದುಕೊಂಡು, ತಮ್ಮ ಮಕ್ಕಳಿಗೆ ಎದೆಹಾಲು ಕೊಡುವುದೊ ಅಥವಾ ಬೇಡವೂ ಎಂದು ನಿರ್ಧರಿಸುತ್ತಿದ್ದಾರೆ.  ನಮ್ಮನ್ನು ಜನ್ಮ ಕೊಟ್ಟ  ತಾಯಂದಿರೆ ಪುತನಾಗಳಾದರೆ ಹೇಗೆನಮಗೆ ಅಕ್ಕಿ, ಜೋಳ, ಗೋದಿ, ರಾಗಿ ಹಾಗೂ ಹಣ್ಣುಗಳು, ತರಕಾರಿಗಳನ್ನು ನೀಡುವ ನಮ್ಮ ಭೂಮಿತಾಯಿ ಪುತನಾವಾದಳೇ?


ನೀವು ಪುತನಾ ಕಥೆ ಕೇಳಿರಬಹುದು, ದ್ವಾಪರ ಯುಗದಲ್ಲಿ ಕೃಷ್ಣನು ಇನ್ನೂ ಕಂದಮ್ಮವಾಗಿದ್ದಾಗ, ಕೃಷ್ಣನನ್ನು ತನ್ನ ಸ್ತನದ ಹಾಲನ್ನು (ಎದೆಹಾಲು) ವಿಷವಾಗಿ ನೀಡಿ, ಕೊಲ್ಲಲು ಯತ್ನಿಸಿದಳು.  ಆದರೆ ಕೃಷ್ಣನು, ಅದನ್ನು ಮೊದಲೆ ಅರಿತು ಅವಳ ಪ್ರಾಣವನ್ನು ತೆಗೆಯುತ್ತಾನೆ.  ಅದರೆ ನಾವು ಕೃಷ್ಣನಂತೆ ದೈವಿ ಮಗು ಅಲ್ಲ, ಕೃಷ್ಣನಂತೆ ಸಶಕ್ತರೂ ಅಲ್ಲ. ನಮ್ಮ ತಾಯಂದಿರು ವಿಷಪೂರಿತ ಧಾನ್ಯಗಳು, ತರಕಾರಿಗಳು, ಹಣ್ಣು, ನೀರು, ಗಾಳಿಯನ್ನು ಸೇವಿಸಿ ಪುತನಾ ಗಳಾಗಿದ್ದಾರೆ. ಇದನ್ನೆಲ್ಲಾ ಪೂರೈಸುವ ಭೂಮಿತಾಯಿಯೂ ಕೂಡ ಪುತನಾ ವಾಗಿದ್ದಾಳೆ.  ಇದಕ್ಕೆಲ್ಲ ಕಾರಣ ನಾವು ಅನುಸರಿಸಿದ, ಅತೀಯಾದ ಅಜೈವಿಕ ಕೃಷಿ ಹಾಗೂ ಅಸ್ವಾಭಾವಿಕ ಪದ್ಧತಿಗಳೇ ಕಾರಣ.  ನಾನು ಅಂತಿಮವಾಗಿ ಏನು ಹೇಳಬಯಸುತ್ತೇನೆಂದರೆ ಮುಂದೆ ನೀವು ಏನು ಮಾಡಬೇಕೆಂಬುದು ನಿಮ್ಮ ಬುದ್ದಿಗೆ ಹಾಗೂ ಮನಸ್ಸಿಗೆ ಬಿಟ್ಟುಬಿಡುತ್ತೇನೆ.  ಅದರೆ ರೈತರಲ್ಲಿ ಒಂದು ಮನವಿ, ಸಾವಯವ ಕೃಷಿ ಮಾಡಿ, ನಮ್ಮ ಭೂಮಿ ತಾಯಿಯನ್ನು ಉಳಿಸಿ ಹಾಗೂ ಜನ್ಮ ಕೊಡೊ ತಾಯಂದಿರನ್ನು ಉಳಿಸಿ.

----- ಸುಧೀಂದ್ರ ದೇಸಾಯಿ


Email ID : talk2desai@gmail.com